ನವದೆಹಲಿ : ಪೋಕ್ಸೊ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿನ ಪ್ರಕರಣಗಳ ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸುವಂತೆ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ನವದೆಹಲಿ : ಎಲ್ಲವೂ ನಿರೀಕ್ಷೆಯಂತೆ ನಡೆದರೆ ಆಗಸದಲ್ಲಿ ಹಾರುತ್ತಿರುವ ವಿಮಾನದಿಂದಲೇ ಪ್ರಯಾಣಿಕರು ಮೊಬೈಲ್ ಕರೆ ಮಾಡುವ ಸೌಲಭ್ಯವನ್ನು ಶೀಘ್ರವೇ ಪಡೆಯಬಹುದು. ಜೊತೆಗೆ ಅಂತರ್ಜಾಲ ಬಳಕೆ ಮಾಡಬಹುದು. ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮೊಬೈಲ್ ಕರೆ ಮತ್ತು ಅಂತರ್ಜಾಲ ಸೇವೆ ನೀಡುವ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಮಂಗಳವಾರ ಒಪ್ಪಿಗೆ ಸೂಚಿಸಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಪ್ರಯಾಣಿಕರಿಗೆ ಈ ಸೇವೆ ದೊರೆಯಲಿದೆ. ಟ್ರಾಯ್ ಎಲ್ಲ ಪ್ರಸ್ತಾಪಕ್ಕೂ ಒಪ್ಪಿಗೆ
: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಿಟ್ಟ ಬೇಡಿಕೆಗೆ ದೂರಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್ ನೇತೃತ್ವದ ದೂರಸಂಪರ್ಕ ಆಯೋಗ ಷರತ್ತುಬದ್ಧ ಒಪ್ಪಿಗೆ ನೀಡಿದೆ.
ನವದೆಹಲಿ : ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಇದು 2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಕೊಟ್ಟ ಅತ್ಯಂತ ದೊಡ್ಡ ಭರವಸೆಯಾಗಿತ್ತು. ಅದು ಈಗ ಈಡೇರಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನವದೆಹಲಿ : ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿ ನೀಡಿದ್ದ ನಿರ್ದೇಶನಗಳ ಜಾರಿಗೆ ಸಮಯ ನಿಗದಿ ಮಾಡಲು ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು ಸುಪ್ರೀಂ ಕೋರ್ಟನ್ನು ಕೆರಳಿಸಿದೆ. ‘ಇದು ಅತಿಯಾಯಿತು. ಇದು ಬಡವರ ಶೋಷಣೆ’ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ದೀಪಕ್ ಮಿಶ್ರಾ ಅವರ ಪೀಠ ಹೇಳಿದೆ. ದೇಶದ ಬಡ ಜನರ ಬಗ್ಗೆ ಭಾರತ ಸರ್ಕಾರದ ಧೋರಣೆ ಇದುವೇ ಎಂದು ಪೀಠ ಪ್ರಶ್ನಿಸಿತು. ‘ಗಡುವು ನಿಗದಿ ಮಾಡಲು ನೀವು ಸಮಿತಿಯೊಂದನ್ನು ರಚಿಸಿದ್ದೀರಿ. ಇಲ್ಲಿ ಏನು ನಡೆಯುತ್ತಿದೆ?
₹20 ಸಾವಿರದಿಂದ ₹25 ಸಾವಿರ ಕೋಟಿಯನ್ನು ಇಟ್ಟುಕೊಂಡು ಕೂತಿದ್ದೀರಿ. ಬಡವರ ಬಗೆಗಿನ ಸರ್ಕಾರದ ನಿಲುವು ಇದೇನಾ’ ಎಂದು ಪೀಠ ಕಟುವಾಗಿ ಪ್ರಶ್ನಿಸಿತು.
ನವದೆಹಲಿ : ಯುನೆಸ್ಕೊ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿರುವ ವಿಶ್ವಪ್ರಸಿದ್ಧ ತಾಜ್ಮಹಲ್ನ ಬಣ್ಣ ಬದಲಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಚ್ಚಬಿಳುಪಿನ ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ತಾಜ್ ಬಣ್ಣ ಮೊದಲಿಗೆ ಹಳದಿ ಬಣ್ಣಕ್ಕೆ ತಿರುಗಿತ್ತು. ನಂತರ ಕಂದು ಬಣ್ಣ ಹಾಗೂ ಈಗ ಹಸಿರು ಬಣ್ಣವಾಗುತ್ತಿದೆ ಎಂದಿರುವ ಸುಪ್ರೀಂ, ‘ದೇಶ ಮತ್ತು ವಿದೇಶಗಳ ತಜ್ಞರನ್ನು ಸಂಪರ್ಕಿಸಿ ತಾಜ್ಗೆ ಉಂಟಾಗಿರುವ ಹಾನಿ ಕುರಿತು ಕೇಂದ್ರ ಸರ್ಕಾರ ತಿಳಿಯಬೇಕು. ನಂತರ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದೆ.
ನವದೆಹಲಿ : ಸೂಪರ್ ಬೈಕ್ಗಳನ್ನು ತಯಾರಿಸುವ ಇಟಲಿಯ ಡುಕಾಟಿ ಸಂಸ್ಥೆಯು ಭಾರತದ ಮಾರುಕಟ್ಟೆಗೆ ಹೊಸ ಆವೃತ್ತಿಯ
‘ಮಾನ್ಸ್ಟರ್ 821’ ಬಿಡುಗಡೆ ಮಾಡಿದೆ. ಈ ಬೈಕ್ನ ಎಕ್ಸ್ ಷೋರೂಂ ಬೆಲೆ ₹
9.51 ಲಕ್ಷದಿಂದ ಆರಂಭವಾಗುತ್ತದೆ. ಯುರೊ 4 ಮಾನದಂಡದ ಲಿಕ್ವಿಡ್ ಕೂಲ್ಡ್ ಎಂಜಿನ್
109 ಎಚ್ಪಿ ಶಕ್ತಿ ಹೊಂದಿದೆ.
ನವದೆಹಲಿ : ‘ವೇತನ ಸಂಹಿತೆ ಮಸೂದೆ 2017’ಯನ್ನು ಸಂಸತ್ತಿನ ಸ್ಥಾಯಿ ಸಮಿತಿಯು ಅಂತಿಮಗೊಳಿಸಿದ್ದು, ಸಂಸತ್ತಿನ ಮುಂಗಾರು ಅಧಿವೇಶ ನದಲ್ಲಿ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಈ ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗಿ ಜಾರಿಗೆ ಬರುತ್ತಿದ್ದಂತೆ, ದೇಶದಾದ್ಯಂತ ವಿವಿಧ ವಲಯಗಳಿಗೆ ನಿರ್ದಿಷ್ಟ ಮಟ್ಟದ ಕನಿಷ್ಠ ವೇತನ ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಪ್ರಾಪ್ತವಾಗಲಿದೆ. ಕೇಂದ್ರವು ನಿಗದಿಪಡಿಸುವ ಈ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿ ಕನಿಷ್ಠ ವೇತನ ನಿಗದಿಪಡಿಸಲು ರಾಜ್ಯಗಳಿಗೆ ಅವಕಾಶ ಇರುವುದಿಲ್ಲ.
ವಾಷಿಂಗ್ಟನ್ : ‘ಅಮೆರಿಕದಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಲಸೆ ಕಾನೂನುಗಳು ಅತ್ಯಂತ ಹಳತು ಮತ್ತು ದುರ್ಬಲವಾಗಿವೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವಲಸೆ ಕಾನೂನುಗಳಲ್ಲಿನ ಲೋಪದೋಷಗಳಿಂದ ಭಯೋತ್ಪಾದಕರು, ಅಪರಾಧಿಗಳು, ಅಕ್ರಮ ಸಾಗಾಣಿಕೆದಾರರು ತಪ್ಪಿಸಿಕೊಳ್ಳುತ್ತಿದ್ದಾರೆ. ಈಗಿರುವ ವ್ಯವಸ್ಥೆಯಿಂದ ಅಕ್ರಮ ವಲಸೆಗಾರರಿಂದ ಉಂಟಾಗಿರುವ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಸದರ ಸಭೆ ಕರೆದಿದ್ದೇನೆ’ ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್ : ‘ಬಾಹ್ಯಾ ಕಾಶ ಕ್ಷೇತ್ರಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅಮೆರಿಕದ ಹೀರೊ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಮೇ ತಿಂಗಳನ್ನು ‘ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳ ಪಾರಂಪರಿಕ ತಿಂಗಳು’ ಎಂದು ಘೋಷಿಸಿದ ನಂತರ ಟ್ರಂಪ್ ಕಲ್ಪನಾ ಚಾವ್ಲಾ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಈ ಹೇಳಿಕೆ ನೀಡಿದ್ದಾರೆ.
ನವದೆಹಲಿ : ಭಾರತದ ಬಾಕ್ಸರ್ ನೀರಜ್ ಗೋಯತ್ ಅವರು ಡಬ್ಲ್ಯುಬಿಸಿಯ ವರ್ಷದ ಏಷ್ಯಾ ಬಾಕ್ಸರ್ ಪ್ರಶಸ್ತಿಗೆ ಭಾಜನರಾ
ಗಿದ್ದಾರೆ. ‘ಡಬ್ಲ್ಯುಬಿಸಿಯಿಂದ ಈ ಗೌರವ ಸಿಕ್ಕಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಮರ್ಥ್ಯ ತೋರಬೇಕಿದೆ’ ಎಂದು ನೀರಜ್ ಹೇಳಿದ್ದಾರೆ.
ಗಿದ್ದಾರೆ. ‘ಡಬ್ಲ್ಯುಬಿಸಿಯಿಂದ ಈ ಗೌರವ ಸಿಕ್ಕಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಮರ್ಥ್ಯ ತೋರಬೇಕಿದೆ’ ಎಂದು ನೀರಜ್ ಹೇಳಿದ್ದಾರೆ.
ದುಬೈ : ಭಾರತ ಕ್ರಿಕೆಟ್ ತಂಡವು ಐಸಿಸಿ ಟೆಸ್ಟ್ ತಂಡಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಭಾರತ
2017–18ರಲ್ಲಿ ಆಡಿದ್ದ 13 ಟೆಸ್ಟ್ ಪಂದ್ಯಗಳಲ್ಲಿ 10ರಲ್ಲಿ ಜಯಿಸಿತ್ತು. ತಂಡವು ತನ್ನ ಖಾತೆಯಲ್ಲಿ ಒಟ್ಟು
125 ಪಾಯಿಂಟ್ಸ್ ಹೊಂದಿದೆ. ದಕ್ಷಿಣ ಆಫ್ರಿಕಾದ ಖಾತೆಯಲ್ಲಿ
112 ಪಾಯಿಂಟ್ಸ್ಗಳಿವೆ. ನಾಲ್ಕು ಪಾಯಿಂಟ್ಸ್ ಹೆಚ್ಚು ಗಳಿಸಿರುವ ಆಸ್ಟ್ರೇಲಿಯಾವು 106 ಪಾಯಿಂಟ್ಸ್ ಹೊಂದಿದೆ. 102 ಪಾಯಿಂಟ್ಸ್ನೊಂದಿಗೆ ನ್ಯೂಜಿಲೆಂಡ್ ನಾಲ್ಕು ಮತ್ತು 98
ಪಾಯಿಂಟ್ಸ್ ಹೊಂದಿರುವ
ಇಂಗ್ಲೆಂಡ್ ತಂಡವು ಐದನೇ ಸ್ಥಾನದಲ್ಲಿದೆ.
ಇಂಗ್ಲೆಂಡ್ ತಂಡವು ಐದನೇ ಸ್ಥಾನದಲ್ಲಿದೆ.
ನವದೆಹಲಿ : ಭಾರತದ ಶೂಟರ್ ಶಹಜಾರ್ ರಿಜ್ವಿ ಅವರು ಮಂಗಳವಾರ ಐಎಸ್ಎಸ್ಎಫ್ ಬಿಡುಗಡೆ ಮಾಡಿರುವ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕೊರಿಯಾದ ಚಾಂಗ್ವಾನ್ನಲ್ಲಿ ನಡೆದ, ಇತ್ತೀಚೆಗೆ ಮುಕ್ತಾಯಗೊಂಡ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ನ 10
ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರು ತಮ್ಮ ಖಾತೆಯಲ್ಲಿ ಒಟ್ಟು 1654 ಪಾಯಿಂಟ್ಸ್ ಹೊಂದಿದ್ದಾರೆ.
ನವದೆಹಲಿ : ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೈಫಲ್ಯ ಕಂಡ ಕಾರಣ ಭಾರತ ಹಾಕಿ ತಂಡದ ಕೋಚ್ ಶೊರ್ಡ್ ಮ್ಯಾರಿಜ್ ಅವರನ್ನು ಬದಲಿಸಲಾಗಿದೆ. ಅವರನ್ನು ಮಹಿಳಾ ತಂಡದ ಕೋಚ್ ಆಗಿ ನೇಮಿಸಿದ್ದು ಮಹಿಳೆಯರ ಕೋಚ್ ಆಗಿದ್ದ ಹರೇಂದರ್ ಸಿಂಗ್ ಅವರನ್ನು ಪುರುಷ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಏಳು ತಿಂಗಳ ಹಿಂದೆ ರೋಲಂಟ್ ಓಲ್ಟಮನ್ಸ್ ಅವರನ್ನು ವಜಾ ಮಾಡಲಾಗಿತ್ತು. ಆಗ ಮಹಿಳಾ ತಂಡದ ಕೋಚ್ ಆಗಿದ್ದ ಶೊರ್ಡ್ ಅವರನ್ನು ಪುರುಷ ತಂಡಕ್ಕೆ ನೇಮಕ ಮಾಡಲಾಗಿತ್ತು. ಆರಂಭದಲ್ಲಿ ಅವರು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದರು. ಆದರೆ ಕಾಮನ್ವೆಲ್ತ್ ಕೂಟದ ಹಾಕಿಯಲ್ಲಿ ತಂಡಕ್ಕೆ ಕಂಚು ಗೆಲ್ಲುವುದಕ್ಕೂ ಆಗಲಿಲ್ಲ.
No comments:
Post a Comment