- ಬೆಂಗಳೂರು: ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ ಶೇ 6ರಷ್ಟು ಏರಿಕೆ ಮಾಡಲಾಗಿದೆ.ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ಸಿ) 2018–19ರ ಸಾಲಿನ ಪರಿಷ್ಕೃತ ವಿದ್ಯುತ್ ದರಗಳನ್ನು ಸೋಮವಾರ ಪ್ರಕಟಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 25 ಪೈಸೆಯಿಂದ 38 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಉಳಿದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಏಕರೂಪದ ಏರಿಕೆ ಮಾಡಲಾಗಿದೆ. ಇಲ್ಲಿ ಏರಿಕೆ ಪ್ರಮಾಣ 20 ಪೈಸೆಯಿಂದ 60 ಪೈಸೆಯಷ್ಟು ಇದೆ. ಹೊಸ ದರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ.
- ಗಾಜಾ : ಜೆರುಸಲೇಂನಲ್ಲಿ ಅಮೆರಿಕದ ರಾಯಭಾರ ಕಚೇರಿ ಸ್ಥಾಪನೆಗೆ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 41 ಪ್ಯಾಲೆಸ್ಟೀನಿಯರು ಇಸ್ರೇಲಿ ಸೇನಾ ಪಡೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. 2014ರ ನಂತರ ನಡೆದ ಅತಿದೊಡ್ಡ ಹಿಂಸಾಚಾರ ಇದು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ಯಾಲೆಸ್ಟೀನಿಯರು ಗಾಜಾ ಪಟ್ಟಿಯಲ್ಲಿ ಗೋಧಿ ಬೆಳೆಗೆ ಮತ್ತು ಟೈರ್ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಇಸ್ರೇಲಿ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
- ಕಠ್ಮಂಡು : ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಚೀನಾದ ಪರ್ವತಾರೋಹಿ ಕ್ಸಿಯಾ ಬೊಯು ಸಾಕ್ಷಿ. ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್ ಅನ್ನು ಸೋಮವಾರ ಏರಿದ ಕ್ಸಿಯಾ ‘ವಿಶೇಷ’ ಸಾಧನೆಗೆ ಪಾತ್ರರಾಗಿದ್ದಾರೆ. ವಿಶೇಷ ಏಕೆಂದರೆ, ಕ್ಸಿಯಾಗೆ ಎರಡೂ ಕಾಲುಗಳಿಲ್ಲ! ತೀವ್ರ ಶೈತ್ಯದ ಕಾರಣ ಚರ್ಮದಲ್ಲಿ ಹುಣ್ಣಾಗಿ ಕ್ಸಿಯಾ ಎರಡೂ ಕಾಲುಗಳನ್ನು ನಾಲ್ಕು ದಶಕಗಳ ಹಿಂದೆಯೇ ಕಳೆದುಕೊಂಡಿದ್ದಾರೆ. ಶಿಖರವೇರುವ ಪ್ರಯತ್ನದಲ್ಲಿದ್ದಾಗಲೇ ಅವರು ಹಿಮ ಹುಣ್ಣಿಗೆ ತುತ್ತಾಗಿದ್ದರು. ಛಲ ಬಿಡದ ಕ್ಸಿಯಾ, ಐದನೇ ಪ್ರಯತ್ನದಲ್ಲಿ 29,029 ಅಡಿ (8,848 ಮೀಟರ್) ಎತ್ತರದ ಈ ಶಿಖರ ಏರಿದ್ದಾರೆ. ಇವರೊಂದಿಗೆ ಇತರೆ ಏಳು ಜನರ ತಂಡವೂ ಶಿಖರ ಏರುವಲ್ಲಿ ಯಶಸ್ವಿಯಾಗಿದೆ.
Tuesday, May 15, 2018
ಮಂಗಳವಾರ ಮೇ 15-2018
Subscribe to:
Post Comments (Atom)
ಬುಧವಾರ ಮೇ 16-2018
ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...
-
ಬೆಂಗಳೂರು : ‘ ಮಹದಾಯಿ ಜಲ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಬಿಜೆಪಿ ಬದ್ಧ ’ ಎಂದು ಗದಗದಲ್ಲಿ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮ...
-
ಇಂದೋರ್ : ಅತ್ಯಾಚಾರಗಳ ಬಗ್ಗೆ ಇರುವಷ್ಟೇ ಆಕ್ರೋಶ , ಆ ಪ್ರಕರಣಗಳ ವಿಳಂಬಗತಿಯ ವಿಚಾರಣೆ , ವರ್ಷಗಳ ನಂತರ ತೀರ್ಪು ಪ್ರಕಟವಾಗುವ ಕುರಿತೂ ಇದೆ . ಆ...
-
ಬೆಂಗಳೂರು : ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ 71.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು , ಈ ಬಾರಿಯೂ ಮೇಲುಗೈ ಸಾಧಿಸಿರುವ ಗ್ರಾಮೀಣ ವಿ...
No comments:
Post a Comment